This page is created to give information to the victims of 400 KVA/ 220 KVA line which is proposed to be upgraded by KPTCL from existing 110 KV SBT . This line will start from NTTF circle to Nelamangala Feeder
Area in which line passes by are as follows :
Nelamangala, Arsina kunte,Mallapura,Shivapura,Gajadakuppe,Narayanappna palya, Harokyatahana Halli,Dombarahalli,Lakshmipura, Srikantapura, Kodagi Tirumalapura, Dodda Bidarakallu, Karihobanahalli, Nelekadarana Halli, Peenya

ಈ ಗ್ರೂಪ್ ನಲ್ಲಿರುವ ಸದಸ್ಯರುಗಳಿಗೆ ಮನವಿ ಮಾಡಿಕೊಳ್ಳುವುದೇನಂದರೆ ಈ ಹಿಂದೆ ಅಳವಡಿಸಿರುವ ಲೈನ್ 66kv ನೆಲಮಂಗಲ ಇಂದ ಎನ್.ಟಿ.ಟಿ.ಎಫ್.ಸರ್ಕಲ್ ಗೆ ಹಾದುಒಗಿರುವ ಆ ಲೈನ್ ನನ್ನು ಬದಲಾವಣೆ ಮಾಡಿ 400kv ಯನ್ನು ಅಳವಡಿಸಲು ಮುಂದಾಗಿದ್ದು ಕೆ.ಪಿ ಟಿ.ಸಿ.ಎಲ್.ನವರು ಲೈನ್ ಹೈಟ್ ಮಾಡ್ತೀವಿ ಅಂತ ಹೇಳಿ ಈ ಬಾಗದ ಜನರಿಗೆ ಸುಳ್ಳು ಮಾಹಿತಿ ಕೊಟ್ಟು 60kv ಇರುವ ಲೈನ್ ಬದಲಾಯಿಸಿ 400/220kv ( Multi Circuit) ಅಳವಡಿಸಲು ಮುಂದಾಗಿರುತ್ತಾರೆ ,ಅದ್ದುದ್ದರಿಂದ ಈಗಿರುವ kv ಗಿಂತ 8 ಪಟ್ಟು ಹೆಚ್ಚು ಇರುತ್ತದೆ ಹಾಗಾಗಿ ಇದರ ತಿವೃತೆ ಕೂಡ ತುಂಬಾ ಮಕ್ಕಳು, ಗರ್ಭಿಣಿಯರ ಮೇಲೆ ತುಂಬಾ ಪರಿಣಾಮ ಬಿರುವುದರಿಂದ ಇದರ ಬಗ್ಗೆ ಮುಂದಿನ ನಡೆ ಏನು ಎಂಬುದನ್ನು ಎಲ್ಲರೂ ಒಗ್ಗಟಾಗಿ ತೀರ್ಮಾನ ವಹಿಸಿ ಎಚ್ಚರವಹಿಸಬೇಕು.
ವಿದ್ಯುತ್ ಲೈನ್ ಹಾದು ಹೋಗಿರುವ ಬಗ್ಗೆ ಹಾಗೂ ಇಲ್ಲಿನ ವರೆಗೆ ನಡೆದಂಥ ಬೆಳವಣಿಗೆಯ ಬಗ್ಗೆ ಚರ್ಚಿಸಲು .ಈ.ಕೆ. ಕೃಷ್ಣಪ್ಪರವರ ಸ್ವ ಗೃಹದಲ್ಲಿ ಸಭೆಯನ್ನು ಕರೆಯಲಾಗಿದ್ದು ಈ ಸಭೆಯಲ್ಲಿ ಪಾಲ್ಗೊಳ್ಳುವ ಮೂಲಕ ಮುಂದಿನ ಹೋರಾಟದ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲು …
ಸ್ಥಳ :ಈ .ಕೃಷ್ಣಪ್ಪರವರ ಸ್ವಗೃಹ
ದಿನಾಂಕ ;08/05/2022
ಸಮಯ :ಬೆಳಿಗ್ಗೆ 7:30 ಭಾನುವಾರದಂದು ಸಭೆಯನ್ನು ಕರೆಯಲಾಗಿದ್ದು ಈ ಸಭೆಗೆ ಪಾಲ್ಗೊಳ್ಳುವ ಮೂಲಕ ಹಾಗೂ ನೀವು ಬರುವಾಗ ತಪ್ಪದೆ ಆಧಾರ್ ಕಾರ್ಡ್ ಮತ್ತು ಪಾಸ್ ಪೋರ್ಟ್ ಅಳತೆಯ 2 ಫೋಟೋಗಳನ್ನು ತೆಗೆದುಕೊಂಡ ಬರಬೇಕೆಂದು ಈ ಗುಂಪಿನ ಸದಸ್ಯರಲ್ಲಿ ಮನವಿ …….
ನಿಮ್ಮೆಲ್ಲರ ಸಹಕಾರ ಮತ್ತು ಹೋರಾಟದಿಂದ ನಮಗೆ ಜಯ
In the meeting it was decided to form an association as “Nelamagala to Peenya Resident’s welfare Association” to fight for the cause of all the above residents in legal way and assist residents to get Justice
Some of the foundations already completed :















ಇಲ್ಲಿಯವರೆಗಿನ ಬೆಳವಣಿಗೆ :
೧. ನೆಲಮಂಗಲ to ಪೀಣ್ಯ ಗ್ರಾಮ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ® ದ ಸ್ಥಾಪನೆ .
೨ .ಹಲವಾರು RTI ಅಪ್ಲಿಕೇಶನ್ ದಾಖಲು ಮಾಡಿ ಈ ಪ್ರಾಜೆಕ್ಟ್ ನ ವಿವರ ವನ್ನು ಕೇಳಲಾಗಿದೆ ಮತ್ತು KPTCL ನಿಂದ ಉತ್ತರಕಾಗಿ ಕಾಯುತ್ತಿರುತ್ತೆವೆ.
೩.ನೆಲಮಂಗಲ ಯೋಜನಾ ಪ್ರಾಧಿಕಾರಕ್ಕೆ BMRDA ಅನುಮೋದಿತ ಸೈಟ್ ಪ್ರಾಜೆಕ್ಟ್ ಗಳ ಸರ್ಟಿಫೈಡ್ ಕಾಪಿ ಗಾಗಿ ಅಪ್ಲಿಕೇಶನ್ ಕೊಟ್ಟಿರುತ್ತೆವೆ .
೪.ಅರ್ಜಿಗಳ ಸಮಿತಿ , ಕರ್ನಾಟಕ ವಿಧಾನಸಭೆ , ವಿಧಾನಸೌಧ ,ಬೆಂಗಳೂರು ಇವರಿಂದ KPTCL ಗೆ ವರದಿ ಸಲ್ಲಿಸುವಂತೆ ನೋಟೀಸ್ ನೀಡಲಾಗಿದೆ .
Date : 17/07/2022: Membership drive was conducted at Sri Chowdeshwari kalyana Mantapa Arasinakunte.

Date : 20/07/2022 : ನೆಲಮಂಗಲ ಟು ಪೀಣ್ಯ ಗ್ರಾಮ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನೆಲಮಂಗಲ MLA Dr . ಕೆ .ಶ್ರೀನಿವಾಸ್ ಮೂರ್ತಿ ರವರಿಗೆ ಭೂಗತ ಕೇಬಲ್ ಅಳವಡಿಸಲು ಮನವಿ ಪತ್ರ ಸಲ್ಲಿಸಲಾಯಿತು

Date : 22/07/2022 : ನೆಲಮಂಗಲ ಟು ಪೀಣ್ಯ ಗ್ರಾಮ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ Rajajinagar constituency MLA Sri. S. Suresh Kumar ರವರಿಗೆ ಭೂಗತ ಕೇಬಲ್ ಅಳವಡಿಸಲು ಮನವಿ ಪತ್ರ ಸಲ್ಲಿಸಲಾಯಿತು.

Date : 27/07/2022 : ನೆಲಮಂಗಲ ಟು ಪೀಣ್ಯ ಗ್ರಾಮ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ YELAHANKA constituency MLA Sri. S. R. VISHWANATH ರವರಿಗೆ ಭೂಗತ ಕೇಬಲ್ ಅಳವಡಿಸಲು ಮನವಿ ಪತ್ರ ಸಲ್ಲಿಸಲಾಯಿತು.


Media Coverage :
News coverage in Srusti August 2022 Edition
Latest High court order on Hightension line :
Compensation towards drawing high-tension electricity lines. Karnataka High Court approves fixation of 50% of the land value as compensation.
Discussion of High-tension line in deveoped areas in the Session

ಸಂಘದ ಸರ್ವ ಸದಸ್ಯರ ಸಭೆ ಮತ್ತು ಕಾನೂನು ಅರಿವು ಮೂಡಿಸಲು ಕಾರ್ಯಾಗಾರ
ದಿನಾಂಕ : 28 Sept 2022 , 11 ಗಂಟೆಗೆ
ಸ್ಥಳ : ಸಿದ್ದು ಗಾರ್ಡನ್ಸ್ , ಕರಿಹೊಬನ ಹಳ್ಳಿ ,ದೊಡ್ಡ ಬೀದರಕಲ್ಲು ವಾರ್ಡ್ ,ಬೆಂಗಳೂರು-560073


ಇಲ್ಲಿಯವರೆಗಿನ ಬೆಳವಣಿಗೆ :
ಮಾನ್ಯ ನಾಗರಿಕರಿಗೆ ಇಲ್ಲಿಯವರೆಗೆ ನಡೆದಿರುವ ಬೆಳವಣಿಗೆ ಬಗ್ಗೆ ವರದಿ :
೧. 28 Sept 2022 ರಂದು ಸಂಘದ ಸರ್ವ ಸದಸ್ಯರ ಸಭೆ ಮತ್ತು ಕಾನೂನು ಅರಿವು ಕಾರ್ಯಾಗಾರ ನಡಸಲಾಯಿತು. ಈ ಸಭೆಯಲ್ಲಿ LEGAL AID TRUST ವತಿಯಿಂದ HIGH TENSION ಲೈನ್ ಬಗ್ಗೆ ಸಮಗ್ರ ಕಾನೂನ ಅರಿವು ಮತ್ತು ನಾಗರಿಕರ ಹಕ್ಕಿನ ಬಗ್ಗೆ ಚರ್ಚೆ ಮಾಡಲಾಯಿತು .
ಮೇಲ್ಕಂಡ ಸಭೆಗೆ ಸಾವಿರಾರು ಸಂಖ್ಯೆ ಯಲ್ಲಿ ಬಾಧಿತರು ಅಗಮಿಸಿ ಪ್ರಯೋಜನ ಪಡೆದರು.
೨. ಬಾಧಿತರಿಂದ ಈಗಾಗಲೇ ಒಂದು ಸಿವಿಲ್ ಕೇಸ್ ದಾಖಲಾಗಿರುತ್ತೆ ಮತ್ತು 2 ಉಚ್ಚ ನ್ಯಾಯಾಲದಲ್ಲಿ WRIT ಪಿಟಿಷನ್ ಫೈಲ್ ಆಗಿರುತ್ತದೆ ಮತ್ತು ಎಲ್ಲ ಕೇಸ್ ಗಳು ಹಿಯರಿಂಗ್ ಸ್ಟೇಜ್ ನಲ್ಲಿರುತ್ತದೆ .
೩. ಮುಂದಿನ ಬೆಳವಣಿಗೆ : ನವೆಂಬರ್ ತಿಂಗಳ್ಲಲಿ ಮಾನ್ಯ ಇಂಧನ ಸಚಿವರು ಮತ್ತು ಮಾನ್ಯ ಮುಖ್ಯಮಂತ್ರಿ ಗಳ ಬಳಿ ಬಾಧಿತರ ನಿಯೋಗ ಕೊಂಡೊಯುವ ಪ್ರಸ್ತಾಪ ಸಂಘದ ಮೇಲಿದೆ . ಇದಕ್ಕೆ ತಮ್ಮೆಲರ ಸಹಕಾರ ಕೋರುತ್ತೇವೆ .
೪. ಈ ವಾಟ್ಸ್ ಅಪ್ ಗ್ರೂಪ್ ನಿಮಗೆಲ್ಲರಿಗೆ HIGH TENSION LINE ಮಾಹಿತ ನೀಡಲು ರಚಿಸಲಾಗಿದೆ . ಅನ್ಯ ಮೆಸೇಜ್ ಗಳಿಂದ ಮೆಂಬರ್ ಗಳಿಗೆ ತೊಂದರೆ ವುಂಟಾಗಬಾರದು .
೫. ಯಾವುದೇ ಸಂದರ್ಭದಲ್ಲಿ ತಮ್ಮ ಜಾಗದಲ್ಲಿ KPTCL ಕಂಟ್ರಾಕ್ಟರ್ ರಿಂದ ಕೆಲಸದ ಪ್ರಾರಂಭದ ಸುಳಿವು ಈ ಕೆಳಗಿರುವ ನಂಬರ್ ಗೆ ಕೆಲಸ ನಡೆಯುತ್ತಿರಿವ ಲೊಕೇಶನ್ , ಫೋಟೋ ವಾಟ್ಸ್ ಆಪ್ ಮೂಲಕ ಅಥವಾ ಕಾಲ್ ಮಾಡಿ ತಿಳಿಸುವದು .
ಸಂತೋಷ್ 9731110953
ಪ್ರಮೋದ್ : 9845989916
ಮಂಜುನಾಥ್ :9964256969
ಕೃಷ್ಣಪ್ಪ : 9243063192
ನಮ್ಮ ಮೇಲ್ಕಂಡ ಕೆಲಸಕ್ಕೆ ಸಹಾಯ ವಾಗುವಂತೆ ತಾವುಗಳು ಲೈನ್ ಹಾದು ಹೋಗುವ ಮಾರ್ಗದಲ್ಲಿ ಬರುವ ಮನೆ ಅಥವಾ ಸೈಟ್ ನವರು ತಮ್ಮ ಮನೆಯ ಅಥವಾ ಸೈಟ್ ನ ಫೋಟೋ , ಬೆಸ್ಕಾಂ ಅಪ್ರೂವಲ್ ಲೆಟರ್ , ಮನೆಯ ಸೇಲ್ ಡೀಡ್ ಕಾಪಿ, ಸಮಕ್ಷಮ ಪ್ರಾಧಿಕಾರದ ಅಪ್ರೂವಲ್ ಲೆಟರ್ e-mail nela2peenya@gmail.com ಅಥವಾ ನಮ್ಮೆ ಗ್ರೂಪ್ ನ ಸಂಚಾಲಕರಿಗೆ ತಲುಪಿಸ ತಕ್ಕದು .
OUR BANK ACCOUNT DETAILS :
NELAMANGALA TO PEENYA GRAMA N K SANGHA
Account no. 50200070287211
IFSC CODE: HDFC0008586
Current account, NANDINI LAYOUT, BANGALORE

Letter from DC ಬೆಂಗಳೂರು ಗ್ರಾಮಾಂತರ ಜಿಲ್ಲೆ : ವಿಷಯ: 220 ಕೆ.ವಿ. ಮಲ್ಟಿ ಸರ್ಕ್ಯೂಟ್ ನೆಲಮಂಗಲ – ಬೃಂದಾವನ ಪ್ರಸರಣ ಮಾರ್ಗದ ನಿರ್ಮಾಣ ಕಾಮಗಾರಿಗೆ ಒಳಪಡುವ ಜಮೀನುಗಳಿಗೆ ಪರಿಹಾರ ದರ ನಿಗಧಿಪಡಿಸಲು ಕೋರಿರುವ ಬಗ್ಗೆ.
ಕರ್ನಾಟಕ ಸರ್ಕಾರ
ಕಂದಾಯ ಇಲಾಖೆ
ಜಿಲ್ಲಾಧಿಕಾರಿ ಹಾಗೂ ಜಿಲ್ಲಾದಂಡಾಧಿಕಾರಿಯವರ ಕಾರ್ಯಾಲಯ, ಬೆಂಗಳೂರು ಗ್ರಾಮಾಂತರ ಜಿಲ್ಲೆ
1ನೇ ಮಹಡಿ, ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ, ಕುಂದಾಣ ಹೋಬಳಿ, ದೇವನಹಳ್ಳಿ ತಾಲ್ಲೂಕು. ಇ-ಮೇಲ್ : deo.bangalorer3@gmail.com
ಸಂಖ್ಯೆ:ಎA.ಎ.ಜಿ/ಮಿಸ್/ಸಿ.ಆರ್/443/2022-23 ದಿನಾಂಕ : 20/03/2023
“ಸಭಾ ಸೂಚನಾ ಪತ್ರ”
ವಿಷಯ: 220 ಕೆ.ವಿ. ಮಲ್ಟಿ ಸರ್ಕ್ಯೂಟ್ ನೆಲಮಂಗಲ – ಬೃಂದಾವನ ಪ್ರಸರಣ ಮಾರ್ಗದ ನಿರ್ಮಾಣ ಕಾಮಗಾರಿಗೆ ಒಳಪಡುವ ಜಮೀನುಗಳಿಗೆ ಪರಿಹಾರ ದರ ನಿಗಧಿಪಡಿಸಲು ಕೋರಿರುವ ಬಗ್ಗೆ.
220 ಕೆ.ವಿ. ಮಲ್ಟಿ ಸರ್ಕ್ಯೂಟ್ ನೆಲಮಂಗಲ – ಬೃಂದಾವನ ಪ್ರಸರಣ ಮಾರ್ಗದ ನಿರ್ಮಾಣ ಕಾಮಗಾರಿಗೆ ಒಳಪಡುವ ಜಮೀನುಗಳಿಗೆ ಪರಿಹಾರ ದರ ನಿಗಧಿಪಡಿಸುವ ಸಂಬAಧ ದಿನಾಂಕ:24-03-2023 ರಂದು ಅಪರಾಹ್ನ 12:00 ಗಂಟೆಗೆ ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಡತೆಯಲ್ಲಿ ನೆಲಮಂಗಲ ತಾಲ್ಲೂಕಿನ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ವತಿಯಿಂದ 400 ಕೆ.ವಿ. ನೆಲಮಂಗಲ ಕೇಂದ್ರದಿAದ ಬೃಂದಾವನ ಲಿಲೋ ಪಾಯಿಂಟ್ ಹತ್ತಿರದ 220 ಕೆ.ವಿ. ಕೇಬಲ್ ಟರ್ಮಿನೇಟಿಂಗ್ ಟವರ್ ನಿರ್ಮಾಣದ ಕಾರ್ಯದಡಿ ಅಧಿಕ ವಿದ್ಯುತ್ವಾಹಕ ತಂತಿ ಹಾದು ಹೋಗುವ ಮಾರ್ಗವನ್ನು ಉನ್ನತೀಕರಿಸುವ ಕಾಮಗಾರಿಗೆ ಒಳಪಡುವ ಅರಶಿನಕುಂಟೆ ಮತ್ತು ಮಲ್ಲಾಪುರ ಗ್ರಾಮ ಜಮೀನುಗಳಿಗೆ ಭೂ ಪರಿಹಾರ ದರ ನಿಗಧಿಪಡಿಸುವು ಸಂಬAಧ ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಸಭೆಯನ್ನು ಏರ್ಪಡಿಸಲಾಗಿದ್ದು, ಸದರಿ ಸಭೆಗೆ ಈ ಕೆಳಕಾಣಿಸಿದ ಅಧಿಕಾರಿಗಳು ಅಗತ್ಯ ಮಾಹಿತಿಯೊಂದಿಗೆ ಖುದ್ದು ಸಭೆಗೆ ಹಾಜರಾಗಲು ಕೋರಿದೆ.
ಜಿಲ್ಲಾಧಿಕಾರಿಗಳ ಪರವಾಗಿ,
ಬೆಂಗಳೂರು ಗ್ರಾಮಾಂತರ ಜಿಲ್ಲೆ.
ಪ್ರತಿಯನ್ನು :-
- ಉಪವಿಭಾಗಾಧಿಕಾರಿಗಳು, ದೂಡ್ಡಬಳ್ಳಾಪುರ ಉಪವಿಭಾಗ, ದೂಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ.
- ಪ್ರಾಜೆಕ್ಟ್ ಮ್ಯಾನೇಜರ್, ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರ, ನಂ 13, 14ನೇ ಕೆ.ಎಂ.ನಾಗಸAದ್ರ, ಬೆಂಗಳೂರು ತುಮಕೂರು ರಸ್ತೆ, ಬೆಂಗಳೂರು – 560073
- ಕಾರ್ಯನಿರ್ವಾಹಕ ಇಂಜಿನಿಯರ್, (ವಿ) ಬೃಹತ್ ಕಾಮಗಾರಿಕೆ ಉತ್ತರ ವಿಭಾಗ, ಕೆ.ವಿ.ಪ್ರ.ನಿ.ನಿ (ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ) ಬೆಂಗಳೂರು – 560009
- ಭೂದಾಖಲೆಗಳ ಸಹಾಯಕ ನಿರ್ದೇಶಕರು, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.
- ಹಿರಿಯ ಉಪನೋಂದಣಾಧಿಕಾರಿ, ನೋಂದಣಿ ಮತ್ತು ಮುದ್ರಣಾ ಇಲಾಖೆ, ನೆಲಮಂಗಲ ಉಪನೋಂದಣಿ ಕಛೇರಿ, ನಂ 743 ಎನ್.ಹೆಚ್, ಕಾಂಪ್ಲೆಕ್ಸ್, 1ನೇ ಮಹಡಿ, ಶ್ರೀಶ್ರೀ ಬಾಲಗಂಗಾಧರನಾಥ ಸ್ವಾಮಿ ಮುಖ್ಯರಸ್ತೆ, (ಹಳೆ ಬಿ.ಹೆಚ್. ರಸ್ತೆ) ಬಿನ್ನಮಂಗಲ, ನೆಲಮಂಗಲ ಟೌನ್, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.
- ತಹಶೀಲ್ಲಾರ್, ನೆಲಮಂಗಲ ತಾಲ್ಲೂಕು, ನೆಲಮಂಗಲ ರವರಿಗೆ ಕಳುಹಿಸುತ್ತಾ, ಸದರಿ ಸಭೆಗೆ ಸಂಬAಧಿಸಿದ ಭೂ ಮಾಲೀಕರಿಗೆ ಸಭಾ ಸೂಚನಾ ಪತ್ರವನ್ನು ಜಾರಿ ಮಾಡಲು ಕೋರಿದೆ.
- ಕಛೇರಿ ಪ್ರತಿ.
Proceedings at DC meeting on 24th of March 2023 AT Devanahalli DC office
ಬೆಂಗಳೂರು,ಬೆಂಗಳೂರು ಗ್ರಾಮಾಂತರ ಜಿಲ್ಲೆ,ವ್ಯಾಪ್ತಿಯಲ್ಲಿ ಅರಿಷಿಣಕುಂಟೆ,ಮಲ್ಲಾಪುರ ಗ್ರಾಮಗಳಲ್ಲಿ ಕೆಪಿಟಿಸಿಎಲ್ ಕಂಬಗಳ ಮುಖಾಂತರ ಲೈನ್ ಹಾದು ಹೋಗುವ ಮಾರ್ಗದ ಹತ್ತಿರ ಇರುವ ಭೂ ಮಾಲಿಕರು ಪರಿಹಾರಕ್ಕಾಗಿ ಕೆಪಿಟಿಸಿಎಲ್ ನ ವಿರುದ್ದ ಹೋರಾಟ ಮಾಡುವುದು ಮತ್ತು ಇವರ ಯೋಜನೆಗಳ ಕಾಮಗಾರಿಗಳು ಮಾಡದಂತೆ ತಡೆಹಿಡಿದದ್ದನ್ನು ಗಮನಿಸಿದ ಕೆಪಿಟಿಸಿಎಲ್ ನವರು ಕಾನೂನಿನ ಧಾಖಲೆಯನ್ನು ಜಿಲ್ಲಾಧಿಕಾರಿಗಳ ಮುಖಾಂತರ ಸೃಷ್ಟಿ ಮಾಡುವುದಕ್ಕಾಗಿ ದಿನಾಂಕ:24-3-2023 ರಂದು ಭೂಮಾಲಿಕರ ಪರಿಹಾರ ನೀಡುವುದರ ವಿಷೆಯದ ಬಗ್ಗೆ ಚರ್ಚಿಸಲಿಕ್ಕೆ ಕೆಪಿಟಿಸಿಎಲ್ ನವರು ಸಭೆ ಕರೆದಿದ್ದರು ಮತ್ತು ಅವರು ಭೂ ಮಾಲಿಕರ ಹೆಸರಿನ ಪಟ್ಟಿಯನ್ನು ತಂದು ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಸಭೆಯ ಪೂರ್ವಬಾವಿಯ ಸಮಯದಲ್ಲಿ ಹೆಸರನ್ನು ಕೂಗುತ್ತೇವೆ ಕೂಗಿದವರ ಹೆಸರು ಇಲ್ಲದವರು ಹೊರಹೋಗಬೆಕೆಂದು ಹೆಸರನ್ನು ಕೂಗಿದರು ಹಳೇ ಪಾಣಿಯಲ್ಲಿರುವವರ ಹೆಸರು ಮತ್ತು ಎಷ್ಟೋಜನ ಸತ್ತು ಹೋದವರ ಹೆಸರನ್ನು ಕೂಗಿದಾಗ ಸಭೆಯಲ್ಲಿ ಬಾಗವಹಿಸಿದವರಿಗೆ ಗೊಂದಲ ಉಂಟಾಯಿತು ಕೆಲವರ ಹೆಸರು ಮಾತ್ರ ಸರಿಯಿತ್ತು ನೆಲಮಂಗಲ ಟು ಪೀಣ್ಯಾ ನಿವಾಸಿಗಳ ಕ್ಷೇಮಾಭಿವೃದ್ದಿ ಹೋರಾಟ ಸಂಘದ ಪ್ರಧಾನ ಕಾರ್ಯದರ್ಶಿ ಮತ್ತು ಪದಾಧಿಕಾರಿಗಳು ಕೆಪಿಟಿಸಿಎಲ್ ಮತ್ತು ಸಂಭಂದಪಟ್ಟ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು ಸಭೆಗೆ ನಲಮಂಗಲ ತಹಶೀಲ್ದಾರರಿಗೆ ಸಭೆಯಲ್ಲಿ ಭಾಗವಹಿಸುವಂತೆ ಸೂಚಿಸಲಾಗಿತ್ತು ಗೈರುಹಾಜರ್ ಆಗಿದ್ದರು ಕೆಪಿಟಿಸಿಎಲ್ ನವರು ಮೋಸಗಾರರು ರಜೆ,ಹಬ್ಬ ಈಗ ಯುಗಾದಿ ಹಬ್ಬ ಯಾರು ಬಂದಾರು ಅಂತಾನೇ ಇಂಥಹ ಪ್ರಮುಖ ಸಭೆಯ ನೋಟೀಸನ್ನು ಸಧ್ಯ ಫೋಜಿಷ್ ನಲ್ಲಿರುವ ಭೂ ಮಾಲಿಕರಿಗೆ ತಿಳಿಸದೇ ೨೦ ತಾರೀಖು ನೋಟೀಸ್ ಜಾರಿಮಾಡಿ 24ನೇ ತಾರೀಖಿಗೆ ಡಿಸಿ ಕಛೇರಿಗೆ ಪರಿಹಾರ ಬೇಕಾದವರು ಸಭೆಗೆ ಬನ್ನಿ ಅಂತಾ ಸತ್ತೋದವರ ಹೆಸರಿಗೆ ಮತ್ತು ಡವಲಪರ್ಸ್ ಬಿಲ್ಡರ್ಸ್ ಖರೀದಿ ಮಾಡಿಕೊಂಡ ಮೂಲ ಆಸ್ತಿದಾರರ ಹೆಸರಿಗೆ ನೋಟಿಸ್ ಕಳುಹಿಸಿಲ್ಲ . ಈ ನೋಟಿಸ್ ಗಳುಕೂಡಾ ಸಾವಿರಾರು ಭೂ ಮಾಲಿಕರಿಗೆ ತಲುಪದೆ ತಮ್ಮ ಅನುಕೂಲಕ್ಕೆ ಕಾನೂನಿನ ಕಣ್ಣಿಗೆ ಮಣ್ಣು ಎರಚಲು ಇಂದಿನ ಸಭೆ ಕರೆದಿದ್ದರು ಯಾವಾಗ ನೆಲಮಂಲ ಟು ಪೀಣ್ಯಾ ನಿವಾಸಿ ಗ್ರಾಮ ನಿವಾಸಿಗಳ ಕ್ಷೇಮಾಭಿವೃದ್ದಿ ಹೋರಾಟ ಸಂಘದವರು ಇವರು ಜನರಿಗೆ ತಲುಪದ ಹಾಗೆ ಕಳಿಸಿದ ನೋಟಿಸ್ ಗಳನ್ನು ಸಂಭಂದಪಟ್ಟ ಭೂ ಮಾಲಿಕರಿಗೆ ಮತ್ತು ವಂಶಸ್ಥರಿಗೆ ತಿಳಿಸಿ ಜಾಗೃತಿ ಮೂಡಿಸಿದ್ದಕ್ಕೆ ಕೆಲವರು ಸಭೆಗೆ ಹಾಜರಾಗಿದ್ದರು ಕೆಪಿಟಿಸಿಎಲ್ ಲೈನ್ ಹತ್ತಿರವಿರುವ ಭೂ ಮಾಲಿಕರೆ ಎಚ್ಚೆತ್ತುಕೊಳ್ಳಿ ಯಾವುದೇ ತರಹದ ಇವರ ಧಾಖಲೆಗಳಿಗೆ ಸಹಿ ಹಾಕಬೇಡಿ ಮುಂದಿನದಿನಗಳಲ್ಲಿ ಇವರು ನಿಮ್ಮ ಆಸ್ತಿ ಕಸಿದುಕೊಂಡು ಓಡಿಸಲೂಬಹುದು ಎಚ್ಚರ
ಇಂದು ಇದನ್ನು ಗಮನಿಸಿದ ಜಿಲ್ಲಾಧಿಕಾರಿಗಳು ಸಭೆಗೆ ಹಾಜರ್ ಆಗಲಿಲ್ಲ ಈ ಬಗ್ಗೆ ನಿಜಾಂಶ ತಿಳಿಯಲು ನಮ್ಮ ಪತ್ರಿಕೆ ಹಿರಿಯ ವರದಿಗಾರರಾದ ಹರೀಶ್ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಕಾಶೆಟ್ಟಿ ಡಿಸಿ ಯವರನ್ನು ಬೇಟಿಯಾದಾಗ ಸಭೆಗೆ ಬಂದವರ ಸಂಖ್ಯೆ ಕಡಿಮೆಯಿದೆ ಮತ್ತು ಸೂಕ್ತ ಭೂ ಮಾಲಿಕರಿಗೆ ಮಾಹಿತಿ ಇಲ್ಲ ಈ ಬಗ್ಗೆ ಶೋಕಾಸ್ ನೋಟಿಸನ್ನು ಅಧಿಕಾರಿಗಳಿಗೆ ಜಾರಿ ಮಾಡಿ ಸ್ಥಳ ಪರಿಸಲನೆ ಮಾಡಲು ಆದೇಶ ಹೊರಡಿಸುತ್ತೇನೆ ಮುಂದಿನ ಸಭೆಯಲ್ಲಿ ಅಂದು ಯಾವುದೇ ಕುಂದು ಕೊರತೆಗಳ ಬಗ್ಗೆ ಚರ್ಚಿಸಿ ಭೂ ಮಾಲಿಕರಿಗೂ ಮತ್ತು ಕೆಪಿಟಿಸಿಎಲ್ ನವರಿಗೂ ನ್ಯಾಯ ಒದಗಿಸಲು ಸೂಕ್ತ ಕ್ರಮಕೈಗೊಳ್ಳುವುದಾಗಿ ತಿಳಿಸಿದರು,.
Latest Media coverage :
Some photos of the Event :

Media update :

Read more at:
http://timesofindia.indiatimes.com/articleshow/94521431.cms?utm_source=contentofinterest&utm_medium=text&utm_campaign=cppst
Association email id : nela2peenya@gmail.com
Meeting of Urban DC held on 17th of June 2023:
ಸಭಾ ಸೂಚನಾ ಪತ್ರ
400 ಕೆ.ವಿ ನೆಲಮಂಗಲ ಕೇಂದ್ರದಿಂದ 220 ಕೆ.ವಿ ಬೃಂದಾವನ ಕೇಂದ್ರದ ಹತ್ತಿರದ 220 ಕೆ.ವಿ ಸಿಟಿಟಿವರೆಗೆ 110 ಕೆವಿ ಎಸ್.ಬಿ.ಟಿ ಕಾರಿಡಾರ್ ಉಪಯೋಗಿಸಿ 220 ಕೆ.ವಿ ಬಹುಮಾರ್ಗ (4 ಸಕ್ಯೂ ಟ್) ಸ್ಥಾಪನೆ ಕಾಮಗಾರಿಗೆ ಒಳಪಡುವ ಬೆಂಗಳೂರು ಉತ್ತರ ತಾಲ್ಲೂಕು, ದಾಸನಪುರ ಹಾಗೂ ಯಶವಂತಪುರ ಹೋಬಳಿಗೆ ಸಂಬಂಧಿಸಿದ ಶಿವನಪುರ, ಗಜ್ಜದಗಕುಪ್ಪೆ, ನಾರಾಯಣಪಾಳ್ಯ, ಹಾರೋಕ್ಯಾತನಹಳ್ಳಿ, ದೂಂಬರಹಳ್ಳಿ, ಲಕ್ಷಿಪುರ, ಶ್ರೀಕಂಠಪುರ, ಕೂಡಗಿ ತಿರುಮಲಪುರ, ದೂಡ್ಡಬಿದರಕಲ್ಲು, ಕರಿಹೋಬನಹಳ್ಳಿ ಮತ್ತು ನೆಲಗದರನಹಳ್ಲಿ ಗ್ರಾಮಗಳ ಜಮೀನುಗಳಿಗೆ ಪರಿಹಾರ ನೀಡುವ ಬಗ್ಗೆ ಹಾಗೂ ಇತರೆ ವಿಷಯಗಳ ಬಗ್ಗೆ ಚರ್ಚಿಸಲು ದಿನಾಂಕ : 16.06.2023 ರಂದು ಶುಕ್ರವಾರ ಪೂರ್ವಾಹ್ನ 11.30 ಗಂಟೆಗೆ ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ, ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಸಭೆಯನ್ನು ಕರೆಯಲಾಗಿದೆ ಸದರಿ ಸಭೆಗೆ ಎಲ್ಲಾ ಅಗತ್ಯ ಮಾಹಿತಿಗಳೂಂದಿಗೆ ಖುದ್ದು ಹಾಜರಿರಲು ಕೋರಿದೆ.————ಜಿಲ್ಲಾಧಿಕಾರಿಗಳ ಪರವಾಗಿ






Copy of Objection submistted to Urban DC Bangalore
Copy of Representation given to Urban DC Bangalore
ಯಲಹಂಕ ಕ್ಷೇತ್ತ್ರ ದ ನಾಯಕರಾದ ಶ್ರೀಯುತ .ಬಿ.ಕೇಶವ ರಾಜಣ್ಣ ರವರು ೨೨೦ hightension ಲೈನ್ ಬಾಧಿತರ ಸಂಕಷ್ಟ ಅರಿಯಲು ಪಾರ್ಲೆಜಿ ಫ್ಯಾಕ್ಟರಿ ಯಿಂದ ಲೈನ್ ಹಾದು ಹೋಗುವ ಮಾರ್ಗದಲ್ಲಿ ಪಾದಯಾತ್ರೆ ಮಾಡಲಿದ್ದಾರೆ . ಎಲ್ಲಾ ೨೨೦ hightension ಲೈನ್ ಬಾಧಿತರು ಹೆಚ್ಚಿನ ಸಂಖ್ಯೆ ಯಲ್ಲಿ ಹಾಜರಿರಲು ಕೋರಿದೆ
ಸ್ಥಳ : ಪಾರ್ಲೆಜಿ ಫ್ಯಾಕ್ಟರಿ, ತುಮಕೂರ್ ರಸ್ತೆ
ಬೆಳಗ್ಗೆ : ೧೦.೦೦ ಗಂಟೆ Date : 24th of June 2023




Join what’s app Group using the link given below if you fall in the above area and your Land or site proposed to be under the 400 KV or 220 KVA line as proposed above.
https://chat.whatsapp.com/LggOttLlJbgJxcv9MKxvqH